Friday, March 4, 2011

ಮತ್ತದೇ ಪುನರಾವರ್ತನೆ

ಮತ್ತೊಬ್ಬ ಎಂಎಲ್ಎ ರಾಜೀನಾಮೆ ಸಲ್ಲಿಸಿದ್ದಾರೆ. ಕಾರಣ ಕ್ಷೇತ್ರದ ಅಭಿವೃದ್ಧಿ. ಕೊಪ್ಪಳ ಶಾಸಕ ಕರಡಿ ಸಂಗಣ್ಣ ಈಗ ಮಾಜಿಯಾಗಿದ್ದಾರೆ.
ಬಿಜೆಪಿ ಒಪ್ಪಲಿ ಬಿಡಲಿ. ರಾಜೀನಾಮೆ ಕೊಟ್ಟ ಶಾಸಕರೆಲ್ಲ ಆಮೇಲೆ ಸೇರಿದ್ದು ಕಮಲ ಪಾಳಯಕ್ಕೆ. ಇಲ್ಲಿ ದುಡ್ಡು ಕಾಸಿನ ವ್ಯವಹಾರ ನಡೆದಿದೆ ಅನ್ನೋ ಆರೋಪ ಮೇಲ್ನೋಟಕ್ಕೆ ಸಾಕ್ಷ್ಯ ಒದಗಿಸುತ್ತೆ. ಪ್ರತಿ ಮೂರೂ ತಿಂಗಳು, ಆರು ತಿಂಗಳಿಗೆ ಒಂದು ಚುನಾವಣೆ ರಾಜ್ಯದಲ್ಲಿ ನಡೀತಿದೆ. ಜನಕ್ಕೆ ಬೇಡದೆ ಇದ್ರೂ ಬಿಜೆಪಿಗೆ ಸಧ್ಯ ಚುನಾವಣೆ ಬೇಕು. ಪದೇ ಪದೆ ಜನರು ತಮ್ಮ ಬೆಂಬಲಕ್ಕೆ ಇದ್ದರೋ ಇಲ್ಲವೋ ಅನ್ನೋದನ್ನು ಬಿಜೆಪಿ ಪರೀಕ್ಷಿಸುತ್ತಲೇ ಇದೆ.
ಇದಕ್ಕೆ ಕೊನೆ ಎಂದು ಅನ್ನೋ ಮಾತನ್ನು ಪ್ರತಿಯೊಬ್ಬರೂ ಕೇಳುತ್ತಲೇ ಇದ್ದಾರೆ. ಮತದಾರು ಭ್ರಷ್ಟರಾಗಿದ್ದಾರೆ ಅನ್ನೋದನ್ನು ಉಪಚುನಾವಣೆಗಳಲ್ಲಿ ಸೋತವರು ಹೇಳ್ತಾರೆ. ಆದ್ರೆ ಮತದಾರರನ್ನು ಭ್ರಷ್ಟರನ್ನಾಗಿಸಿದ್ದು ಯಾರು ಎಂಬ ಪ್ರಶ್ನೆಗೆ ಯಾವುದೇ ಒಂದು ಪಕ್ಷದ ಕಡೆಗೆ ಮಾತ್ರ ಬೆರಳು ತೋರಿಸೋದು ಕಷ್ಟ.
ಆದ್ರೆ ಜನ ಇಂಥ ಅವಸ್ಥೆಗೆ ಯಾವಾಗ ಪಾಠ ಕಳಿಸುತ್ತಾರೆ ಅನ್ನೋದು ಸಧ್ಯ ಉತ್ತರ ಇಲ್ಲದ ಪ್ರಶ್ನೆಯಾಗಿದೆ.