ಆ ರಾತ್ರಿಗಾಗಿ ಕಳೆದ ಐದು ವರ್ಷಗಳಿಂದ ಕಾದಿದ್ದೆ. ಅಂತೂ ಆ ಕಾಯುವಿಕೆ ಕೊನೆಯಾಯಿತು. ಜೀವನ ಸಾರ್ಥಕವಾಯಿತು. ಮುಂದೆ ಅದೇ ರಾತ್ರಿ ಮತ್ತೆ ಮರುಕಳಿಸಬಹುದು. ಆದರೆ ಆ ಮೊದಲ ರಾತ್ರಿಗಾಗಿ ಇದ್ದ ಕಾಯುವಿಕೆ ಇದೆಯೆಲ್ಲಾ. ಅದು ಅವರ್ಣನೀಯ. ಯಾಕೆಂದರೆ ಅದು ಮದುಮಗಳ ನಿರೀಕ್ಷೆ !
ಯಸ್. ಹಾಗೆೊಂದು ರಾತ್ರಿಯನ್ನು ಸಾರ್ಥಕಗೊಳಿಸಿದ್ದು 'ಮಲೆಗಳಲ್ಲಿ ಮದುಮಗಳು'. ರಂಗಭೂಮಿಯ ಮೇಲೆ ಮಲೆಗಳಲ್ಲಿ ಮದುಮಗಳು ಬಂದು ಐದು ವರ್ಷಗಳು ಕಳೆದಿದೆ. 2010ರಲ್ಲಿ ಮೊದಲ ಬಾರಿಗೆ ಮೈಸೂರಿನಲ್ಲಿ ರಂಗ ಪ್ರಯೋಗ ಕಂಡ ಮದುಮಗಳು ಆಗಿಂದಲೂ ಕೈ ಬೀಸಿ ಕರೆಯುತ್ತಿದ್ದಳು. ಒಂದಿಲ್ಲೊಂದು ಕಾರಣಕ್ಕೆ ರಂಗಭೂಮಿಯ ಈ ಅದ್ಭುತವನ್ನು ನೋಡೋದಿಕ್ಕೆ ಕಾಲಾವಕಾಶ ಕೂಡಿ ಬಂದಿರಲೇ ಇಲ್ಲ. ಹೋಗಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದು ಎಷ್ಟೋ ಸಲ. ಜಸ್ಟ್ ಮಿಸ್ ಆಗಿದ್ದು ಕೆಲವು ಸಲ. ಕೊನೆಗೂ ನೋಡಿದೆ ಮೊದಲ ಸಲ.
ನಿಜ. ರಂಗಭೂಮಿಯಲ್ಲಿ ಅನೇಕ ಪ್ರಯೋಗಗಳು ಕಾಲದಿಂದ ಕಾಲಕ್ಕೆ ನಡೆಯುತ್ತಲೇ ಬಂದಿವೆ. ಅನೇಕ ವಿಸ್ಮಯಗಳಿಗೆ ರಂಗಭೂಮಿ ತೆರೆದುಕೊಂಡಿದೆ. ಒಂದು ನಾಟಕವನ್ನು ಇಡೀ ರಾತ್ರಿ ನಡೆಸುವುದೂ ವಿಶೇಷವಲ್ಲ. ಯಕ್ಷಗಾನ ಬಯಲಾಟವನ್ನು ನೋಡುತ್ತಾ ಬೆಳೆದು ಬಂದವರಿಗೆ ಇಡೀ ರಾತ್ರಿ ನಾಟಕ ನಡೆಸುತ್ತಾರೆ ಅನ್ನೋದು ದೊಡ್ಡ ವಿಸ್ಮಯವಲ್ಲ. ಆದರೆ ಮಲೆಗಳಲ್ಲಿ ಮದುಮಗಳು ಅನ್ನೋ ಮಹಾ ಕಾದಂಬರಿಯನ್ನು ರಂಗರೂಪಕ್ಕೆ ಇಳಿಸಿ, ರಂಗದ ಮೇಲೆ ಆ ಮಲೆನಾಡ ಚಿತ್ರಣ ರೂಪಿಸಿ ಆ ಮಾಯಾಲೋಕಕ್ಕೆ ಕೊಂಡೊಯ್ದು, ಪ್ರೇಕ್ಷಕರನ್ನು ಇಡೀ ರಾತ್ರಿ ಅಲ್ಲೇ ತಿರುಗಾಡಿಸುವುದು ಇದೆಯಲ್ಲಾ ಅದು ನಿಜಕ್ಕೂ ಅದ್ಭುತ.
ಮಲೆಗಳಲ್ಲಿ ಮದುಮಗಳು ರಂಗರೂಪ ಪಡೆದ ಸಂದರ್ಭದಿಂದಲೂ ಈ ಕಾದಂಬರಿಯನ್ನು ಅದ್ಹೇಗಪ್ಪಾ ರಂಗಕ್ಕೆ ತಂದಿದ್ದಾರೆಂಬ ಕುತೂಹಲ ಇದ್ದೇ ಇತ್ತು. ಗೆಳೆಯರನೇಕರು ನಾಟಕ ನೋಡಿ ಬಂದು ಹೊಟ್ಟೆ ಉರಿಸಿದ್ದರು. ನಾಲ್ಕು ಬೇರೆ ಬೇರೆ ರಂಗಭೂಮಿಗಳಲ್ಲಿ ನಾಟಕ ಸಾಗುತ್ತೆ ಅಂತೆಲ್ಲಾ ಹೇಳಿದ್ದರು. ಇದು ಮತ್ತಷ್ಟು ಕಲ್ಪನೆಗಳು ಬೆಳೆಯೋಕೆ ಅವಕಾಶ ಕೊಟ್ಟಿತೇ ಹೊರತು ಕುತೂಹಲ ತಣಿಸಲಿಲ್ಲ. ಅಂತೂ ನಾಲ್ಕು ರಂಗಗಳ ಮೇಲೆ ರೂಪತಳೆದು ನಿಂತ 'ಮಲೆಗಳಲ್ಲಿ ಮದುಮಗಳ' ಸ್ವರೂಪ ಕಂಡಿದ್ದು ಅವರ್ಣನೀಯ ಅನುಭವ ಕಟ್ಟಿಕೊಟ್ಟಿತು.
ಮೊದಲಿಗೆ ಈ ಕಾದಂಬರಿಯನ್ನು ರಂಗರೂಪಕ್ಕೆ ತಂದ ನಾರಾಯಣಸ್ವಾಮಿಯವರಿಗೆ ಹ್ಯಾಟ್ಸಪ್ ಹೇಳಲೇ ಬೇಕು. ಇಡೀ ಕಾದಂಬರಿಯ ಮೂಲ ಧಾರೆಯನ್ನು ಹಾಗೆಯೇ ರಂಗದ ಮೇಲೆ ಹರಿಸಿದ್ದಾರೆ. ಇನ್ನು ಸಿ.ಬಸವಲಿಂಗಯ್ಯ. ಈ ಅದ್ಭುತ ನಾಟಕ ನಿರ್ದೇಶಕರ ಬಗ್ಗೆ ಏನು ಹೇಳಬೇಕೋ ಗೊತ್ತಿಲ್ಲ. ಯಾಕೆಂದರೆ ನಾನೊಬ್ಬ ಸಾಮಾನ್ಯ ಪ್ರೇಕ್ಷಕ. ಖಂಡಿತ ಬಸು ಅವರ ನಿರ್ದೇಶನದ ಬಗ್ಗೆ ಹೇಳೋದು ನನ್ನಂತವರಿಗೆ ಕಷ್ಟ. ಬೆಂಗಳೂರಿನ ಕಲಾಗ್ರಾಮದಲ್ಲಿ ಮಲೆನಾಡನ್ನೇ ಸೃಷ್ಟಿಸಿ ಪ್ರೇಕ್ಷಕರನ್ನು ಒಂಭತ್ತು ಗಂಟೆಗಳ ಕಾಲ ಬೇರೆಯದ್ದೇ ಲೋಕದಲ್ಲಿ ತೇಲಿಸಿದ ಮಾಯಗಾರ ಅನ್ನೋದು ಸರಿಯೇನೋ. ಆದರೆ ಬಸು ಅವರು ಮಾಯ ಮಂತ್ರಗಳನ್ನು ನಂಬುವುದಿಲ್ಲ ಅನ್ಸುತ್ತೆ. ಅವರಂತ ಅದ್ಭುತ ನಿರ್ದೇಶಕನನ್ನು ಪಡೆದ ನಾಡು ಧನ್ಯ.
ಈ ನಾಟಕದಲ್ಲಿ ಅಭಿನಯಿಸಿದ ಕಲಾವಿದರ ಎನರ್ಜಿಯನ್ನು ಮೆಚ್ಚಬೇಕು. ಆರಂಭದಿಂದ ಕೊನೆವರೆಗೆ ಅದೇ ಕಲಾವಿದರು ಹಲವು ಪಾತ್ರಗಳ ಮೂಲಕ ಕಾಣಿಸಿಕೊಂಡಾಗಲು ಪಾತ್ರಕ್ಕೆ ಒಪ್ಪುವ ಲವಲವಿಕೆ. ಗುತ್ತಿ ಹಾಗೂ ಹುಲಿಯಾ ಪಾತ್ರದಾರಿಗಳು ಇಡೀ ರಂಗದ ಉದ್ದಗಲಕ್ಕೂ ಓಡಾಡಿದರೂ ಅವರಿಗೆ ಕೊನೆವರೆಗೂ ಸುಸ್ತೆಂಬುದು ಕಾಣಿಸಲೇ ಇಲ್ಲ. ಕೊನೆಗೆ ಹರಿವ ಪ್ರವಾಹದಲ್ಲಿ ಹುಲಿಯನ್ನು ಕಳೆದುಕೊಂಡಾಗ ಗುತ್ತಿಯ 'ಹುಲಿಯಾ.....' ಎಂಬ ಆರ್ತನಾದ ಈಗಲೂ ಕಿವಿಯಲ್ಲಿ ಗುಂಯ್ಗುಡುತ್ತಿದೆ.
ಅಭಿನಯ, ಮೇಕಪ್, ಲೈಟ್, ಸಂಗೀತ, ರಂಗಗೀತೆ, ರಂಗಸಜ್ಜಿಕೆ, ಪ್ರಸಾದನ ಎಲ್ಲದರಲ್ಲೂ ಈ ನಾಟಕ ಅದ್ಭುತವಾಗಿದೆ. ಖಂಡಿತವಾಗ್ಲೂ ಈ ನಾಟಕ ನೋಡದೇ ಇದ್ದರೆ ಜೀವನದಲ್ಲಿ ಅದ್ಭುತ ಅನುಭವವನ್ನು ಮಿಸ್ ಮಾಡ್ಕೊಂಡಂತೆ. ಮುಂದಿನ ಬಾರಿ ನಾಟಕ ಪ್ರದರ್ಶನ ಕಂಡಾಗ ಬಿಡುವು ಮಾಡಿಕೊಂಡು ಮತ್ತೊಮ್ಮೆ ನೋಡಬೇಕು. ಹಾಗೆಯೇ ನೀವೂ ಕೂಡ ನೋಡಿ.
ಯಸ್. ಹಾಗೆೊಂದು ರಾತ್ರಿಯನ್ನು ಸಾರ್ಥಕಗೊಳಿಸಿದ್ದು 'ಮಲೆಗಳಲ್ಲಿ ಮದುಮಗಳು'. ರಂಗಭೂಮಿಯ ಮೇಲೆ ಮಲೆಗಳಲ್ಲಿ ಮದುಮಗಳು ಬಂದು ಐದು ವರ್ಷಗಳು ಕಳೆದಿದೆ. 2010ರಲ್ಲಿ ಮೊದಲ ಬಾರಿಗೆ ಮೈಸೂರಿನಲ್ಲಿ ರಂಗ ಪ್ರಯೋಗ ಕಂಡ ಮದುಮಗಳು ಆಗಿಂದಲೂ ಕೈ ಬೀಸಿ ಕರೆಯುತ್ತಿದ್ದಳು. ಒಂದಿಲ್ಲೊಂದು ಕಾರಣಕ್ಕೆ ರಂಗಭೂಮಿಯ ಈ ಅದ್ಭುತವನ್ನು ನೋಡೋದಿಕ್ಕೆ ಕಾಲಾವಕಾಶ ಕೂಡಿ ಬಂದಿರಲೇ ಇಲ್ಲ. ಹೋಗಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದು ಎಷ್ಟೋ ಸಲ. ಜಸ್ಟ್ ಮಿಸ್ ಆಗಿದ್ದು ಕೆಲವು ಸಲ. ಕೊನೆಗೂ ನೋಡಿದೆ ಮೊದಲ ಸಲ.
ನಿಜ. ರಂಗಭೂಮಿಯಲ್ಲಿ ಅನೇಕ ಪ್ರಯೋಗಗಳು ಕಾಲದಿಂದ ಕಾಲಕ್ಕೆ ನಡೆಯುತ್ತಲೇ ಬಂದಿವೆ. ಅನೇಕ ವಿಸ್ಮಯಗಳಿಗೆ ರಂಗಭೂಮಿ ತೆರೆದುಕೊಂಡಿದೆ. ಒಂದು ನಾಟಕವನ್ನು ಇಡೀ ರಾತ್ರಿ ನಡೆಸುವುದೂ ವಿಶೇಷವಲ್ಲ. ಯಕ್ಷಗಾನ ಬಯಲಾಟವನ್ನು ನೋಡುತ್ತಾ ಬೆಳೆದು ಬಂದವರಿಗೆ ಇಡೀ ರಾತ್ರಿ ನಾಟಕ ನಡೆಸುತ್ತಾರೆ ಅನ್ನೋದು ದೊಡ್ಡ ವಿಸ್ಮಯವಲ್ಲ. ಆದರೆ ಮಲೆಗಳಲ್ಲಿ ಮದುಮಗಳು ಅನ್ನೋ ಮಹಾ ಕಾದಂಬರಿಯನ್ನು ರಂಗರೂಪಕ್ಕೆ ಇಳಿಸಿ, ರಂಗದ ಮೇಲೆ ಆ ಮಲೆನಾಡ ಚಿತ್ರಣ ರೂಪಿಸಿ ಆ ಮಾಯಾಲೋಕಕ್ಕೆ ಕೊಂಡೊಯ್ದು, ಪ್ರೇಕ್ಷಕರನ್ನು ಇಡೀ ರಾತ್ರಿ ಅಲ್ಲೇ ತಿರುಗಾಡಿಸುವುದು ಇದೆಯಲ್ಲಾ ಅದು ನಿಜಕ್ಕೂ ಅದ್ಭುತ.
ಮಲೆಗಳಲ್ಲಿ ಮದುಮಗಳು ರಂಗರೂಪ ಪಡೆದ ಸಂದರ್ಭದಿಂದಲೂ ಈ ಕಾದಂಬರಿಯನ್ನು ಅದ್ಹೇಗಪ್ಪಾ ರಂಗಕ್ಕೆ ತಂದಿದ್ದಾರೆಂಬ ಕುತೂಹಲ ಇದ್ದೇ ಇತ್ತು. ಗೆಳೆಯರನೇಕರು ನಾಟಕ ನೋಡಿ ಬಂದು ಹೊಟ್ಟೆ ಉರಿಸಿದ್ದರು. ನಾಲ್ಕು ಬೇರೆ ಬೇರೆ ರಂಗಭೂಮಿಗಳಲ್ಲಿ ನಾಟಕ ಸಾಗುತ್ತೆ ಅಂತೆಲ್ಲಾ ಹೇಳಿದ್ದರು. ಇದು ಮತ್ತಷ್ಟು ಕಲ್ಪನೆಗಳು ಬೆಳೆಯೋಕೆ ಅವಕಾಶ ಕೊಟ್ಟಿತೇ ಹೊರತು ಕುತೂಹಲ ತಣಿಸಲಿಲ್ಲ. ಅಂತೂ ನಾಲ್ಕು ರಂಗಗಳ ಮೇಲೆ ರೂಪತಳೆದು ನಿಂತ 'ಮಲೆಗಳಲ್ಲಿ ಮದುಮಗಳ' ಸ್ವರೂಪ ಕಂಡಿದ್ದು ಅವರ್ಣನೀಯ ಅನುಭವ ಕಟ್ಟಿಕೊಟ್ಟಿತು.
ಮೊದಲಿಗೆ ಈ ಕಾದಂಬರಿಯನ್ನು ರಂಗರೂಪಕ್ಕೆ ತಂದ ನಾರಾಯಣಸ್ವಾಮಿಯವರಿಗೆ ಹ್ಯಾಟ್ಸಪ್ ಹೇಳಲೇ ಬೇಕು. ಇಡೀ ಕಾದಂಬರಿಯ ಮೂಲ ಧಾರೆಯನ್ನು ಹಾಗೆಯೇ ರಂಗದ ಮೇಲೆ ಹರಿಸಿದ್ದಾರೆ. ಇನ್ನು ಸಿ.ಬಸವಲಿಂಗಯ್ಯ. ಈ ಅದ್ಭುತ ನಾಟಕ ನಿರ್ದೇಶಕರ ಬಗ್ಗೆ ಏನು ಹೇಳಬೇಕೋ ಗೊತ್ತಿಲ್ಲ. ಯಾಕೆಂದರೆ ನಾನೊಬ್ಬ ಸಾಮಾನ್ಯ ಪ್ರೇಕ್ಷಕ. ಖಂಡಿತ ಬಸು ಅವರ ನಿರ್ದೇಶನದ ಬಗ್ಗೆ ಹೇಳೋದು ನನ್ನಂತವರಿಗೆ ಕಷ್ಟ. ಬೆಂಗಳೂರಿನ ಕಲಾಗ್ರಾಮದಲ್ಲಿ ಮಲೆನಾಡನ್ನೇ ಸೃಷ್ಟಿಸಿ ಪ್ರೇಕ್ಷಕರನ್ನು ಒಂಭತ್ತು ಗಂಟೆಗಳ ಕಾಲ ಬೇರೆಯದ್ದೇ ಲೋಕದಲ್ಲಿ ತೇಲಿಸಿದ ಮಾಯಗಾರ ಅನ್ನೋದು ಸರಿಯೇನೋ. ಆದರೆ ಬಸು ಅವರು ಮಾಯ ಮಂತ್ರಗಳನ್ನು ನಂಬುವುದಿಲ್ಲ ಅನ್ಸುತ್ತೆ. ಅವರಂತ ಅದ್ಭುತ ನಿರ್ದೇಶಕನನ್ನು ಪಡೆದ ನಾಡು ಧನ್ಯ.
ಈ ನಾಟಕದಲ್ಲಿ ಅಭಿನಯಿಸಿದ ಕಲಾವಿದರ ಎನರ್ಜಿಯನ್ನು ಮೆಚ್ಚಬೇಕು. ಆರಂಭದಿಂದ ಕೊನೆವರೆಗೆ ಅದೇ ಕಲಾವಿದರು ಹಲವು ಪಾತ್ರಗಳ ಮೂಲಕ ಕಾಣಿಸಿಕೊಂಡಾಗಲು ಪಾತ್ರಕ್ಕೆ ಒಪ್ಪುವ ಲವಲವಿಕೆ. ಗುತ್ತಿ ಹಾಗೂ ಹುಲಿಯಾ ಪಾತ್ರದಾರಿಗಳು ಇಡೀ ರಂಗದ ಉದ್ದಗಲಕ್ಕೂ ಓಡಾಡಿದರೂ ಅವರಿಗೆ ಕೊನೆವರೆಗೂ ಸುಸ್ತೆಂಬುದು ಕಾಣಿಸಲೇ ಇಲ್ಲ. ಕೊನೆಗೆ ಹರಿವ ಪ್ರವಾಹದಲ್ಲಿ ಹುಲಿಯನ್ನು ಕಳೆದುಕೊಂಡಾಗ ಗುತ್ತಿಯ 'ಹುಲಿಯಾ.....' ಎಂಬ ಆರ್ತನಾದ ಈಗಲೂ ಕಿವಿಯಲ್ಲಿ ಗುಂಯ್ಗುಡುತ್ತಿದೆ.
ಅಭಿನಯ, ಮೇಕಪ್, ಲೈಟ್, ಸಂಗೀತ, ರಂಗಗೀತೆ, ರಂಗಸಜ್ಜಿಕೆ, ಪ್ರಸಾದನ ಎಲ್ಲದರಲ್ಲೂ ಈ ನಾಟಕ ಅದ್ಭುತವಾಗಿದೆ. ಖಂಡಿತವಾಗ್ಲೂ ಈ ನಾಟಕ ನೋಡದೇ ಇದ್ದರೆ ಜೀವನದಲ್ಲಿ ಅದ್ಭುತ ಅನುಭವವನ್ನು ಮಿಸ್ ಮಾಡ್ಕೊಂಡಂತೆ. ಮುಂದಿನ ಬಾರಿ ನಾಟಕ ಪ್ರದರ್ಶನ ಕಂಡಾಗ ಬಿಡುವು ಮಾಡಿಕೊಂಡು ಮತ್ತೊಮ್ಮೆ ನೋಡಬೇಕು. ಹಾಗೆಯೇ ನೀವೂ ಕೂಡ ನೋಡಿ.