Friday, July 24, 2020

ಕಾರಣ - ರಾಜಕಾರಣ



ಬದಲಾವಣೆ ಬಯಸುವ
ಜನರಿಗಾಗಿ
ಆಗಿದ್ದಾಂಗೆ ನಾಯಕರೆ
ಇಲ್ಲಿಂದಲ್ಲಿಗೆ ಬದಲಾಗುತ್ತಾರೆ

***

ಅರೆ..! ಅನರ್ಹರು ಅರ್ಹರಾಗುತ್ತಾರೆ
ಅರ್ಹರಾಗದಿದ್ದರೆ, 'ನಾಮ' ಹಾಕುತ್ತಾರೆ
ಕಡೆಗೆ ಜನರಿಗೆ ಉಳಿವುದು
ನಾಮವೇ!

*****

ಪ್ರಭುತ್ವ ಮಕ್ಕಳಿಗೆ ಹಂಚಿಕೆಯಾಗಿ
ಪ್ರಭುಗಳಾದ ಪ್ರಜೆಗಳು
ಆಳಿಸಿಕೊಳ್ಳುವುದು
ತಪ್ಪುವುದಿಲ್ಲ!

******

ಅದೇ ಕದ್ದಿದ್ಯಾರು, ಕೊಟ್ಟಿದ್ಯಾರು?
ಉಂಡಿದ್ಯಾರು? ಬಡಿಸಿದ್ಯಾರು?
ಎನ್ನುವುದೇ ಪ್ರಶ್ನೆ - ಯಾಕೆಂದರೆ
ಸರ್ಕಾರದ ಗಂಟು ತುಂಬುವುದು ಜನ

*****



ತನಿಖೆಗೊಂದು ಸಮಿತಿ ರಚಿಸಬೇಕು!
ಇದ್ದ ಸಂಸ್ಥೆಯ ಹಲ್ಲು ಕಿತ್ತು, ಬಡವಾಗಿದೆ
ತಾವೇ ಹುಟ್ಟಿಸಿದ್ದಕ್ಕೆ ಕೊಟ್ಟರೆ ಹಳ್ಳಹಿಡಿವುದು
ಗೊತ್ತಾಗಿದೆ ಈಗ, ತನಿಖೆಗೊಂದು ಸಮಿತಿ ಬೇಕು!


- ಹರಿಪ್ರಸಾದ್ ಅಡ್ಪಂಗಾಯ