ವಿಧಾನಸಭೆಯ ಕಲಾಪಗಳು ಚರ್ಚೆಯಿಲ್ಲದೆ ಮುಕ್ತಾಯವಾಗಿವೆ. ಹತ್ತು ದಿನಗಳ ಅಧಿವೇಶನ ಆರೇ ದಿನಕ್ಕೆ ಅಂತ್ಯಗೊಂಡಿದೆ.
ಈ ಬಾರಿ ಅಧಿವೇಶನ ಆರಂಭವಾದಾಗ ಹಲವಾರು ನಿರೀಕ್ಷೆಗಳನ್ನು ಜನ ಇಟ್ಟುಕೊಂಡಿದ್ದರು. ಅದು ಹಗರಣಗಳ ವಿಷಯದಿಂದ ಹಿಡಿದು ಕೃಷ್ಣಾ ನದಿ ನೀರಿನ ಲಭ್ಯತೆಯ ಸದ್ಭಳಕೆವರೆಗೆ ಹಲವಾರು ವಿಚಾರಗಳು ಸದನದ ಮುಂದಿದ್ದವು. ಆದ್ರೆ ಅದ್ಯಾವುದಕ್ಕೂ ಅವಕಾಶ ಸಿಗಲೇ ಇಲ್ಲ.
ಆರು ದಿನ ನಡೆದ ಕಲಾಪದಲ್ಲಿ ಮೊದಲ ದಿನ ರಾಜ್ಯಪಾಲರ ಭಾಷಣಕ್ಕೆ ಸೀಮಿತವಾಯಿತು. ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಸುಳ್ಳು ಸಾಧನೆಗಳ ಭಾಷಣ ಓದಬಾರದು ಅಂತ ಪ್ರತಿಪಕ್ಷಗಳು ಸದನದಲ್ಲಿ ಅಡ್ಡಿಪಡಿಸಿದರು. ಹೀಗಾಗಿ ರಾಜ್ಯಪಾಲರು ಓದದೆಯೇ ಸದನದಲ್ಲಿ ಭಾಷಣ ಮಂಡನೆಯಾಯಿತು. ಇದರ ಮಾರನೆ ದಿನ ನಡೆದ ಸಂತಾಪ ಸೂಚನೆ ಕಲಾಪ ಮಾತ್ರ ಯಾವುದೇ ಅಡ್ಡಿಯಿಲ್ಲದೆ ನಡೆದಿದ್ದು. ಸೋಮವಾರದಿಂದ ಗುರುವಾರದ ತನಕ ನಾಲ್ಕು ದಿನ ನಡೆದಿದ್ದು ಬರೀ ಆಲಾಪ ಅಷ್ಟೆ.
ಸದನ ಅನಿರ್ಧಿಷ್ಟಾವಧಿಗೆ ಮುಂದಕ್ಕೆ ಹೋಗಿದ್ದಕ್ಕೆ ಆಡಳಿತ ಹಾಗು ಪ್ರತಿಪಕ್ಷಗಳು ಪರಸ್ಪರರ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ಆದರೆ ಇದರಲ್ಲಿ ಎರಡೂ ಕಡೆಯವರ ಪಾಲು ಸಮಾನವಾಗಿದೆ ಅನ್ನೋದು ಸಾಮಾನ್ಯ ಜನರಿಗೂ ಅರ್ಥವಾಗುವಂತದ್ದು. ಇಲ್ಲಿ ಯಾರು ಸರಿ ಯಾರು ತಪ್ಪು ಅನ್ನೋದಕ್ಕಿಂತಲೂ ನಷ್ಟವಾಗಿದ್ದು ಮಾತ್ರ ರಾಜ್ಯದ ಜನತೆಗೆ.
ಹಿಂದೆಲ್ಲ ಗಲಾಟೆಗೆ ಬಿಹಾರದತ್ತ ಬೊಟ್ಟು ಮಾಡುತಿದ್ದರು. ಆದ್ರೆ ಕಳೆದ ೫ ವರ್ಷಗಳಿಂದ ಬಿಹಾರ ದೇಶಕ್ಕೆ ಮಾದರಿಯಾಗುವ ಹಾದಿ ತುಳಿಯುತ್ತಿದೆ. ಆದ್ರೆ ಸದಾ ಮಾದರಿ ಆಗಿರುತ್ತಿದ್ದ ಕರ್ನಾಟಕ ಎತ್ತ ಸಾಗುತ್ತಿದೆ ?
Friday, January 14, 2011
Subscribe to:
Post Comments (Atom)
No comments:
Post a Comment