ಮತ್ತೊಬ್ಬ ಎಂಎಲ್ಎ ರಾಜೀನಾಮೆ ಸಲ್ಲಿಸಿದ್ದಾರೆ. ಕಾರಣ ಕ್ಷೇತ್ರದ ಅಭಿವೃದ್ಧಿ. ಕೊಪ್ಪಳ ಶಾಸಕ ಕರಡಿ ಸಂಗಣ್ಣ ಈಗ ಮಾಜಿಯಾಗಿದ್ದಾರೆ.
ಬಿಜೆಪಿ ಒಪ್ಪಲಿ ಬಿಡಲಿ. ರಾಜೀನಾಮೆ ಕೊಟ್ಟ ಶಾಸಕರೆಲ್ಲ ಆಮೇಲೆ ಸೇರಿದ್ದು ಕಮಲ ಪಾಳಯಕ್ಕೆ. ಇಲ್ಲಿ ದುಡ್ಡು ಕಾಸಿನ ವ್ಯವಹಾರ ನಡೆದಿದೆ ಅನ್ನೋ ಆರೋಪ ಮೇಲ್ನೋಟಕ್ಕೆ ಸಾಕ್ಷ್ಯ ಒದಗಿಸುತ್ತೆ. ಪ್ರತಿ ಮೂರೂ ತಿಂಗಳು, ಆರು ತಿಂಗಳಿಗೆ ಒಂದು ಚುನಾವಣೆ ರಾಜ್ಯದಲ್ಲಿ ನಡೀತಿದೆ. ಜನಕ್ಕೆ ಬೇಡದೆ ಇದ್ರೂ ಬಿಜೆಪಿಗೆ ಸಧ್ಯ ಚುನಾವಣೆ ಬೇಕು. ಪದೇ ಪದೆ ಜನರು ತಮ್ಮ ಬೆಂಬಲಕ್ಕೆ ಇದ್ದರೋ ಇಲ್ಲವೋ ಅನ್ನೋದನ್ನು ಬಿಜೆಪಿ ಪರೀಕ್ಷಿಸುತ್ತಲೇ ಇದೆ.
ಇದಕ್ಕೆ ಕೊನೆ ಎಂದು ಅನ್ನೋ ಮಾತನ್ನು ಪ್ರತಿಯೊಬ್ಬರೂ ಕೇಳುತ್ತಲೇ ಇದ್ದಾರೆ. ಮತದಾರು ಭ್ರಷ್ಟರಾಗಿದ್ದಾರೆ ಅನ್ನೋದನ್ನು ಉಪಚುನಾವಣೆಗಳಲ್ಲಿ ಸೋತವರು ಹೇಳ್ತಾರೆ. ಆದ್ರೆ ಮತದಾರರನ್ನು ಭ್ರಷ್ಟರನ್ನಾಗಿಸಿದ್ದು ಯಾರು ಎಂಬ ಪ್ರಶ್ನೆಗೆ ಯಾವುದೇ ಒಂದು ಪಕ್ಷದ ಕಡೆಗೆ ಮಾತ್ರ ಬೆರಳು ತೋರಿಸೋದು ಕಷ್ಟ.
ಆದ್ರೆ ಜನ ಇಂಥ ಅವಸ್ಥೆಗೆ ಯಾವಾಗ ಪಾಠ ಕಳಿಸುತ್ತಾರೆ ಅನ್ನೋದು ಸಧ್ಯ ಉತ್ತರ ಇಲ್ಲದ ಪ್ರಶ್ನೆಯಾಗಿದೆ.
Friday, March 4, 2011
Thursday, February 17, 2011
ಕಾಲದ ಒಡಲು
ಕಾಲದ ಒಡಲಲಿ ಎಲ್ಲವು ಒಂದು
ಅಂದು, ಇಂದು, ಎಂದೂ, ಮುಂದು
ನಾಳೆಗೆ ಬೇಡ ಇಂದಿನ ಹಂಗು
ಕಾಲದ ವೇಗಕೆ ತಡೆಯೇ ಇಲ್ಲ
ಉರುಳಿದ ತಲೆಗೆ ಲೆಕ್ಕವೇ ಇಲ್ಲ
ಬುದ್ಧನು ಬಂದ, ಬಸವಣ್ಣನು ಹೋದ
ಗಾಂಧಿ, ವಿವೇಕರು ಫೋಟೋದಲಿ ಚಂದ
ಅಂಗುಲಿಮಾಲ ಬುದ್ದಿಯ ಕಲಿತರು
ಬುದ್ಧನ ಮಾತು ಬರಿ ಪಾಠ
ಬಸವಣ್ಣನ ಸುಧಾರಣೆ, ಗಾಂಧಿಯ ತತ್ವ
ವಿವೇಕರ ನಡೆನುಡಿ ಬೇಕೇಬೇಕು
ಪಾಲನೆಗಲ್ಲ, ಆಲಾಪನೆಗಷ್ಟೇ.
*****
ಕಾಲದ ಉರುಳಿಗೆ ಸಿಗದವರಿಲ್ಲ
ಕಳ್ಳರು, ಸುಳ್ಳರು, ಎಲ್ಲವ ಬಲ್ಲರು
ಬಲ್ಲವರಾರು ಉಳಿಯೋದಿಲ್ಲ
ಉಳಿದದ್ದೆಲ್ಲ ಬಲ್ಲವರಿಲ್ಲ
ಬಲ್ಲವರಿದ್ದರು ತಿಳಿಯುವುದಿಲ್ಲ
ಅಳಿದ ಮೇಲೆ ಹೊಗಳುವರೆಲ್ಲ
ಮಹಾಪುರುಷರ ಮಾತುಗಳೆಲ್ಲ
ಕಾಲಕ್ಕೆ ತಕ್ಕಂತೆ ಬದಲಾಗುವುವು ಇಲ್ಲಿ
ಅಣ್ಣನ ವಚನ, ಅಕ್ಕನ ವಚನ
ಭ್ರಷ್ಟರ ಬಾಯಲಿ ನಿತ್ಯವೂ ಗಾಯನ
ಹೇಳುವುದೊಂದು, ಮಾಡುವುದೊಂದು
ಒಂದಕ್ಕೊಂದು ಹೊಂದಾಣಿಕೆಯಿಲ್ಲ
ಆವಕ್ಕಾಗಿ ನೋಡುವರೆಲ್ಲ
ಮತವನು ಕೊಟ್ಟ ಜನರೆಲ್ಲಾ
ಯಾವುದು ಸತ್ಯ, ಯಾವುದು ಸುಳ್ಳು
ಒಂದೂ ಇಲ್ಲಿ ಗೊತ್ತಾಗೋದಿಲ್ಲ
ಕಾಲದ ಒಡಲಲಿ ಎಲ್ಲವು ಒಂದು
ಬಲ್ಲವರಾರು ಇದನಿಂದು !
ಅಂದು, ಇಂದು, ಎಂದೂ, ಮುಂದು
ನಾಳೆಗೆ ಬೇಡ ಇಂದಿನ ಹಂಗು
ಕಾಲದ ವೇಗಕೆ ತಡೆಯೇ ಇಲ್ಲ
ಉರುಳಿದ ತಲೆಗೆ ಲೆಕ್ಕವೇ ಇಲ್ಲ
ಬುದ್ಧನು ಬಂದ, ಬಸವಣ್ಣನು ಹೋದ
ಗಾಂಧಿ, ವಿವೇಕರು ಫೋಟೋದಲಿ ಚಂದ
ಅಂಗುಲಿಮಾಲ ಬುದ್ದಿಯ ಕಲಿತರು
ಬುದ್ಧನ ಮಾತು ಬರಿ ಪಾಠ
ಬಸವಣ್ಣನ ಸುಧಾರಣೆ, ಗಾಂಧಿಯ ತತ್ವ
ವಿವೇಕರ ನಡೆನುಡಿ ಬೇಕೇಬೇಕು
ಪಾಲನೆಗಲ್ಲ, ಆಲಾಪನೆಗಷ್ಟೇ.
*****
ಕಾಲದ ಉರುಳಿಗೆ ಸಿಗದವರಿಲ್ಲ
ಕಳ್ಳರು, ಸುಳ್ಳರು, ಎಲ್ಲವ ಬಲ್ಲರು
ಬಲ್ಲವರಾರು ಉಳಿಯೋದಿಲ್ಲ
ಉಳಿದದ್ದೆಲ್ಲ ಬಲ್ಲವರಿಲ್ಲ
ಬಲ್ಲವರಿದ್ದರು ತಿಳಿಯುವುದಿಲ್ಲ
ಅಳಿದ ಮೇಲೆ ಹೊಗಳುವರೆಲ್ಲ
ಮಹಾಪುರುಷರ ಮಾತುಗಳೆಲ್ಲ
ಕಾಲಕ್ಕೆ ತಕ್ಕಂತೆ ಬದಲಾಗುವುವು ಇಲ್ಲಿ
ಅಣ್ಣನ ವಚನ, ಅಕ್ಕನ ವಚನ
ಭ್ರಷ್ಟರ ಬಾಯಲಿ ನಿತ್ಯವೂ ಗಾಯನ
ಹೇಳುವುದೊಂದು, ಮಾಡುವುದೊಂದು
ಒಂದಕ್ಕೊಂದು ಹೊಂದಾಣಿಕೆಯಿಲ್ಲ
ಆವಕ್ಕಾಗಿ ನೋಡುವರೆಲ್ಲ
ಮತವನು ಕೊಟ್ಟ ಜನರೆಲ್ಲಾ
ಯಾವುದು ಸತ್ಯ, ಯಾವುದು ಸುಳ್ಳು
ಒಂದೂ ಇಲ್ಲಿ ಗೊತ್ತಾಗೋದಿಲ್ಲ
ಕಾಲದ ಒಡಲಲಿ ಎಲ್ಲವು ಒಂದು
ಬಲ್ಲವರಾರು ಇದನಿಂದು !
Friday, February 11, 2011
ಮರೆಯಾಗದು ಪ್ರಕಾಶ...!
ಎಂ.ಪಿ. ಪ್ರಕಾಶ್ ಇನ್ನಿಲ್ಲ.
ಇದನ್ನು ಒಪ್ಪಿಕೊಳ್ಳೋದು ಕಷ್ಟ. ಹೌದು ಭೌತಿಕವಾಗಿ ಅವರು ಇನ್ನಿರಲಾರು. ಆದ್ರೆ ಅವರು ಮಾಡಿದ ಕೆಲಸಗಳು. ಅವರ ಕೊಡುಗೆಗಳು. ರಾಜಕಾರಣಿಯಾಗಿ ತೋರಿಸಿ ಕೊಟ್ಟ ಹಾದಿ. ಇದು ಎಂದೆಂದಿಗೂ ಚಿರನೂತನ.
ಎಂಪಿ ಪ್ರಕಾಶ್ ನಿಜ ಅರ್ಥದಲ್ಲೂ ಜನನಾಯಕ. ಒಬ್ಬ ಒಳ್ಳೆಯ ರಾಜತಾಂತ್ರಿಕ. ಅವರು ನಿಧನರಾದ ದಿನ ಬೆಂಗಳೂರಿನ ಸ್ವಾತಂತ್ರ್ಯ ಉಧ್ಯಾನಕ್ಕೆ ಸಾವಿರಾರು ಜನ ಹರಿದು ಬಂದಿದ್ರು. ಒಬ್ಬರಲ್ಲೂ ಒಂದೊಂದು ಭಾವನೆ. ರಾಜಕಾರಣಿಗಳು, ಸಾಹಿತಿಗಳು, ರಂಗಕರ್ಮಿಗಳು, ಸಂಗೀತಗಾರರು, ವಿಧ್ಯಾರ್ಥಿಗಳು. ಒಬ್ಬಬ್ಬರು ಒಂದೊಂದು ರೀತಿ ಪ್ರಕಾಶರನ್ನು ನೆನಪು ಮಾಡಿಕೊಂಡರು.
ಅವರಲ್ಲೊಬ್ಬ ವಿದ್ಯಾರ್ಥಿ ಸಿಕ್ಕಿದ್ದ. ಹಡಗಲಿಯವ. ಪಾಲಿಟೆಕ್ನಿಕ್ ಮುಗಿಸಿದ್ದ. ಸರ್.. ನಾನು ಓದೋದಿಕ್ಕೆ ಇವರೇ ಸರ್ ಕಾರಣ. ಸುಮಾರು ಇಪ್ಪತ್ತರ ಆಸುಪಾಸಿನ ಅವನ ಕಣ್ಣುಗಳಲ್ಲಿ ನೋವು ಮಡುಗಟ್ಟಿತ್ತು. ಒಬ್ಬ ರಾಜಕಾರಣಿ ಪ್ರಕಾಶ್ ಹಡಗಲಿಯಲ್ಲಿ ಶಾಲೆ, ಕಾಲೇಜು, ಇಂಜಿನಿಯರಿಂಗ್ ಕಾಲೇಜು ಆರಂಭಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅದರಲ್ಲೂ ಇಂಜಿನಿಯರಿಂಗ್ ಕಾಲೇಜನ್ನು ಹಡಗಲಿಯಲ್ಲಿ ಉಳಿಸಿಕೊಳ್ಳಲು ಸರ್ಕಾರದ ಮೇಲೆ ಇನ್ನಿಲ್ಲದ ಒತ್ತಡ ಹೇರಬೇಕಾದ ಸಂಧರ್ಭ ಎದುರಾದಾಗ ಶಾಸಕರಲ್ಲದಿದ್ದರು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಅಲ್ಲೂ ಹೋಗಿ ಸರ್ಕಾರವನ್ನು ಒತ್ತಾಯಿಸಿದ್ದರು. ತಾಲೂಕು ಕೇಂದ್ರದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಉಳಿಸಿಕೊಳ್ಳಲು ಹರಸಾಹಸಪಟ್ಟಿದ್ದರು. ಇಂತ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಸುಂದರ ಭವಿಷ್ಯ ರೂಪಿಸುವ ಕನಸು ಕಂಡಿದ್ದರು.
ವಿಧ್ಯಾರ್ಥಿ ತನ್ನ ಶಿಕ್ಷಣದ ಬಗ್ಗೆ ಹೇಳಿದ್ರೆ ಸಾಹಿತಿ ಚಂದ್ರಶೇಖರ ಕಂಬಾರರು ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪಿಸಲು, ಅದನ್ನು ಒಂದು ಮಾದರಿ ವಿವಿ ಆಗಿ ರೂಪಿಸಲು ಪ್ರಕಾಶರ ಕೊಡುಗೆಗಳನ್ನು ನೆನಪಿಸಿಕೊಂಡರು. ಹಂಪಿಗೆ ಎಂಪಿ ಕೊಡುಗೆ ಇಷ್ಟೇ ಅಲ್ಲ. ಹಂಪಿ ಉತ್ಸವವನ್ನು ಅವರು ರೂಪಿಸಿದರು. ಹಂಪಿಯ ಕಲ್ಲುಗಳಿಗೆ ಉತ್ಸವದ ಮೂಲಕ ಜೀವ ತುಂಬಿದರು ಎಂಪಿ ಪ್ರಕಾಶ್. ಈಗ ಅದು ರಾಜಕೀಯ ಪ್ರತಿಷ್ಠೆಯ ಉತ್ಸವ ಆಗಿರೋದು ವಿಪರ್ಯಾಸ.
ಪ್ರಕಾಶರ ಬಗ್ಗೆ ಕೆಲವೊಂದು ಅಂಶಗಳನ್ನು ಹೇಳಲೇ ಬೇಕು. ಆಗ ಪ್ರಕಾಶ್ ಜೆಡಿಎಸ್ ತೊರೆಯುವ ಹಂತ ತಲುಪಿದ್ದರು. ಅದು ರಾಜ್ಯದ ರಾಜಕೀಯದಲ್ಲಿ ವತ್ತು. ಜೆಡಿಎಸ್, ಬಿಜೆಪಿಗೆ ಕೈಕೊಟ್ಟಾಗಿತ್ತು. ಆಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜಕೀಯ ಪಕ್ಷದ ಕಾರ್ಯಕಾರಿಣಿ ಸಭೆ ನಡೆಸಿತ್ತು. ಆ ಸಭೆಗೆ ಪ್ರಕಾಶ್ ಮತ್ತು ಅವರ ಬೆಂಬಲಿಗರು ಹೋಗಿರಲಿಲ್ಲ. ಅವತ್ತು ಸಂಜೆ ಅವರದೊಂದು ಪ್ರತಿಕ್ರಿಯೆ ತೆಗೆದುಕೊಳ್ಳಲು ಹೋಗಿದ್ದೆ. ಆಗ ಅವರು ಬಳಸಿದ ವಾಕ್ಯ ಅತ್ಯಂತ ಅರ್ಥಗರ್ಭಿತವಾಗಿತ್ತು. ಅವತ್ತು ಪ್ರಕಾಶ್ ಹೇಳಿದ್ದು : ' ಕರೆಸಿದ ಜನಗಳ ಮುಂದೆ ಕುಳಿತು ಸಭೆ ನಡೆಸಿದರೆ ಅದು ಕಾರ್ಯಕಾರಿಣಿ ಸಭೆ ಆಗುತ್ತಾ?...' ಜೆಡಿಎಸ್ ನಡೆಸಿದ ಅಂದಿನ ಕಾರ್ಯಕಾರಿಣಿಗೆ ಇದಕ್ಕಿಂತ ಉತ್ತಮ ವಿಶ್ಲೇಷಣೆ ಮಾಡೋದಿಕ್ಕೆ ಸಾಧ್ಯ ಇರಲಿಲ್ಲ.
ಪ್ರಕಾಶ್ ರಿಂದ ರಾಜಕೀಯ ಪಾಠ ಕೇಳುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಗೆಳೆಯ ಚೇತನ್ ಇದಕ್ಕೆ ಅವಕಾಶ ಮಾಡ್ಕೊಟ್ಟಿದ್ದ. ಸ್ವಾತಂತ್ರ್ಯ ನಂತರ ಭಾರತ ಹಾಗು ರಾಜ್ಯ ರಾಜಕೀಯದಲ್ಲಿ ಆದ ಬೆಳವಣಿಗೆಗಳ ಬಗ್ಗೆ ಪ್ರಕಾಶ್ ಅವತ್ತು ಸುಮಾರು ಮೂರು ಗಂಟೆಗಳ ಕಾಲ ಹೇಳ್ಕೊಟ್ಟಿದ್ದರು. ಯಾವುದೇ ಪುಸ್ತಕ ಓದಿದರೆ ಸಿಗದಷ್ಟು ಮಾಹಿತಿಯನ್ನು ಅವರು ನೀಡಿದ್ದರು.
ಈಗ ಪ್ರಕಾಶ್ ಇಲ್ಲ. ಅವರು ನೆನಪು ಮಾತ್ರ. ಆದರೆ ಜೀವನದ ಉದ್ದಕ್ಕೂ ಸಮಾಜದ ಮೇಲೆ ಅವರು ಬೀರಿದ ಪ್ರಕಾಶ ಮರೆಯಾಗದು.
ಇದನ್ನು ಒಪ್ಪಿಕೊಳ್ಳೋದು ಕಷ್ಟ. ಹೌದು ಭೌತಿಕವಾಗಿ ಅವರು ಇನ್ನಿರಲಾರು. ಆದ್ರೆ ಅವರು ಮಾಡಿದ ಕೆಲಸಗಳು. ಅವರ ಕೊಡುಗೆಗಳು. ರಾಜಕಾರಣಿಯಾಗಿ ತೋರಿಸಿ ಕೊಟ್ಟ ಹಾದಿ. ಇದು ಎಂದೆಂದಿಗೂ ಚಿರನೂತನ.
ಎಂಪಿ ಪ್ರಕಾಶ್ ನಿಜ ಅರ್ಥದಲ್ಲೂ ಜನನಾಯಕ. ಒಬ್ಬ ಒಳ್ಳೆಯ ರಾಜತಾಂತ್ರಿಕ. ಅವರು ನಿಧನರಾದ ದಿನ ಬೆಂಗಳೂರಿನ ಸ್ವಾತಂತ್ರ್ಯ ಉಧ್ಯಾನಕ್ಕೆ ಸಾವಿರಾರು ಜನ ಹರಿದು ಬಂದಿದ್ರು. ಒಬ್ಬರಲ್ಲೂ ಒಂದೊಂದು ಭಾವನೆ. ರಾಜಕಾರಣಿಗಳು, ಸಾಹಿತಿಗಳು, ರಂಗಕರ್ಮಿಗಳು, ಸಂಗೀತಗಾರರು, ವಿಧ್ಯಾರ್ಥಿಗಳು. ಒಬ್ಬಬ್ಬರು ಒಂದೊಂದು ರೀತಿ ಪ್ರಕಾಶರನ್ನು ನೆನಪು ಮಾಡಿಕೊಂಡರು.
ಅವರಲ್ಲೊಬ್ಬ ವಿದ್ಯಾರ್ಥಿ ಸಿಕ್ಕಿದ್ದ. ಹಡಗಲಿಯವ. ಪಾಲಿಟೆಕ್ನಿಕ್ ಮುಗಿಸಿದ್ದ. ಸರ್.. ನಾನು ಓದೋದಿಕ್ಕೆ ಇವರೇ ಸರ್ ಕಾರಣ. ಸುಮಾರು ಇಪ್ಪತ್ತರ ಆಸುಪಾಸಿನ ಅವನ ಕಣ್ಣುಗಳಲ್ಲಿ ನೋವು ಮಡುಗಟ್ಟಿತ್ತು. ಒಬ್ಬ ರಾಜಕಾರಣಿ ಪ್ರಕಾಶ್ ಹಡಗಲಿಯಲ್ಲಿ ಶಾಲೆ, ಕಾಲೇಜು, ಇಂಜಿನಿಯರಿಂಗ್ ಕಾಲೇಜು ಆರಂಭಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅದರಲ್ಲೂ ಇಂಜಿನಿಯರಿಂಗ್ ಕಾಲೇಜನ್ನು ಹಡಗಲಿಯಲ್ಲಿ ಉಳಿಸಿಕೊಳ್ಳಲು ಸರ್ಕಾರದ ಮೇಲೆ ಇನ್ನಿಲ್ಲದ ಒತ್ತಡ ಹೇರಬೇಕಾದ ಸಂಧರ್ಭ ಎದುರಾದಾಗ ಶಾಸಕರಲ್ಲದಿದ್ದರು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಅಲ್ಲೂ ಹೋಗಿ ಸರ್ಕಾರವನ್ನು ಒತ್ತಾಯಿಸಿದ್ದರು. ತಾಲೂಕು ಕೇಂದ್ರದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಉಳಿಸಿಕೊಳ್ಳಲು ಹರಸಾಹಸಪಟ್ಟಿದ್ದರು. ಇಂತ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಸುಂದರ ಭವಿಷ್ಯ ರೂಪಿಸುವ ಕನಸು ಕಂಡಿದ್ದರು.
ವಿಧ್ಯಾರ್ಥಿ ತನ್ನ ಶಿಕ್ಷಣದ ಬಗ್ಗೆ ಹೇಳಿದ್ರೆ ಸಾಹಿತಿ ಚಂದ್ರಶೇಖರ ಕಂಬಾರರು ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪಿಸಲು, ಅದನ್ನು ಒಂದು ಮಾದರಿ ವಿವಿ ಆಗಿ ರೂಪಿಸಲು ಪ್ರಕಾಶರ ಕೊಡುಗೆಗಳನ್ನು ನೆನಪಿಸಿಕೊಂಡರು. ಹಂಪಿಗೆ ಎಂಪಿ ಕೊಡುಗೆ ಇಷ್ಟೇ ಅಲ್ಲ. ಹಂಪಿ ಉತ್ಸವವನ್ನು ಅವರು ರೂಪಿಸಿದರು. ಹಂಪಿಯ ಕಲ್ಲುಗಳಿಗೆ ಉತ್ಸವದ ಮೂಲಕ ಜೀವ ತುಂಬಿದರು ಎಂಪಿ ಪ್ರಕಾಶ್. ಈಗ ಅದು ರಾಜಕೀಯ ಪ್ರತಿಷ್ಠೆಯ ಉತ್ಸವ ಆಗಿರೋದು ವಿಪರ್ಯಾಸ.
ಪ್ರಕಾಶರ ಬಗ್ಗೆ ಕೆಲವೊಂದು ಅಂಶಗಳನ್ನು ಹೇಳಲೇ ಬೇಕು. ಆಗ ಪ್ರಕಾಶ್ ಜೆಡಿಎಸ್ ತೊರೆಯುವ ಹಂತ ತಲುಪಿದ್ದರು. ಅದು ರಾಜ್ಯದ ರಾಜಕೀಯದಲ್ಲಿ ವತ್ತು. ಜೆಡಿಎಸ್, ಬಿಜೆಪಿಗೆ ಕೈಕೊಟ್ಟಾಗಿತ್ತು. ಆಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜಕೀಯ ಪಕ್ಷದ ಕಾರ್ಯಕಾರಿಣಿ ಸಭೆ ನಡೆಸಿತ್ತು. ಆ ಸಭೆಗೆ ಪ್ರಕಾಶ್ ಮತ್ತು ಅವರ ಬೆಂಬಲಿಗರು ಹೋಗಿರಲಿಲ್ಲ. ಅವತ್ತು ಸಂಜೆ ಅವರದೊಂದು ಪ್ರತಿಕ್ರಿಯೆ ತೆಗೆದುಕೊಳ್ಳಲು ಹೋಗಿದ್ದೆ. ಆಗ ಅವರು ಬಳಸಿದ ವಾಕ್ಯ ಅತ್ಯಂತ ಅರ್ಥಗರ್ಭಿತವಾಗಿತ್ತು. ಅವತ್ತು ಪ್ರಕಾಶ್ ಹೇಳಿದ್ದು : ' ಕರೆಸಿದ ಜನಗಳ ಮುಂದೆ ಕುಳಿತು ಸಭೆ ನಡೆಸಿದರೆ ಅದು ಕಾರ್ಯಕಾರಿಣಿ ಸಭೆ ಆಗುತ್ತಾ?...' ಜೆಡಿಎಸ್ ನಡೆಸಿದ ಅಂದಿನ ಕಾರ್ಯಕಾರಿಣಿಗೆ ಇದಕ್ಕಿಂತ ಉತ್ತಮ ವಿಶ್ಲೇಷಣೆ ಮಾಡೋದಿಕ್ಕೆ ಸಾಧ್ಯ ಇರಲಿಲ್ಲ.
ಪ್ರಕಾಶ್ ರಿಂದ ರಾಜಕೀಯ ಪಾಠ ಕೇಳುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಗೆಳೆಯ ಚೇತನ್ ಇದಕ್ಕೆ ಅವಕಾಶ ಮಾಡ್ಕೊಟ್ಟಿದ್ದ. ಸ್ವಾತಂತ್ರ್ಯ ನಂತರ ಭಾರತ ಹಾಗು ರಾಜ್ಯ ರಾಜಕೀಯದಲ್ಲಿ ಆದ ಬೆಳವಣಿಗೆಗಳ ಬಗ್ಗೆ ಪ್ರಕಾಶ್ ಅವತ್ತು ಸುಮಾರು ಮೂರು ಗಂಟೆಗಳ ಕಾಲ ಹೇಳ್ಕೊಟ್ಟಿದ್ದರು. ಯಾವುದೇ ಪುಸ್ತಕ ಓದಿದರೆ ಸಿಗದಷ್ಟು ಮಾಹಿತಿಯನ್ನು ಅವರು ನೀಡಿದ್ದರು.
ಈಗ ಪ್ರಕಾಶ್ ಇಲ್ಲ. ಅವರು ನೆನಪು ಮಾತ್ರ. ಆದರೆ ಜೀವನದ ಉದ್ದಕ್ಕೂ ಸಮಾಜದ ಮೇಲೆ ಅವರು ಬೀರಿದ ಪ್ರಕಾಶ ಮರೆಯಾಗದು.
Sunday, January 23, 2011
ಬದಲಾದ ಬದುಕು
ನಮ್ಮೂರು ಬದಲಾಗಿದೆ. ಹತ್ತು ಹದಿನೈದು ವರ್ಷಗಳ ಹಿಂದೆ ಹೀಗಿರಲಿಲ್ಲ. ಬದಲಾವಣೆಯಾಗಿದ್ದು ಬರೀ ಊರು ಮಾತ್ರ ಅಲ್ಲ. ನಮ್ಮೂರ ಜನರ ಬದುಕು ಕೂಡ.
ಅಂದಹಾಗೆ ನಮ್ಮೂರ ಹೆಸರು ಅಡ್ಪಂಗಾಯ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹಳ್ಳಿಗಳ ಎಲ್ಲ ಲಕ್ಷಣ ನಮ್ಮೂರಿಗೂ ಇದೆ. ಹಾಗಾಗಿ ಇಲ್ಲಾದ ಬದಲಾವಣೆ ಜಿಲ್ಲೆಯ ಬಹುಭಾಗದಲ್ಲೂ ಆಗಿದೆ ಅಂತ ಹೇಳೋದಿಕ್ಕೆ ಅಡ್ಡಿಯಿಲ್ಲ.
ಆಗೆಲ್ಲ ಭತ್ತದ ಗದ್ದೆಗಳು ಊರಿಗೆ ಬಂದವರನ್ನು ಸ್ವಾಗತಿಸುತ್ತಿದ್ದವು. ಗದ್ದೆ ಉಳುಮೆ, ನೇಜಿ ಕಾಲದಲ್ಲಿ ನಾವು ಪಡುತ್ತಿದ್ದಂತ ಸಂಭ್ರಮ ಸ್ವರ್ಗಕ್ಕೆ ಕಿಚ್ಚು ಹಚ್ಚೆಂಬಂತಿತ್ತು. ಅಪ್ಪನಿಂದ ಸಿಗುತ್ತಿದ್ದ ಬೈಗಳ. ಅದಕ್ಕೆ ಅವ್ವ ಕೊಡುತ್ತಿದ್ದ ಸಾಥ್. ಇದೆಲ್ಲ ಸ್ವಲ್ಪ ಹೊತ್ತು ಬೇಜಾರ್ ಮಾಡುತ್ತಿದ್ದರು ಅವ್ರು ಹೇಳೋದು ನಮ್ ಒಳ್ಳೇದಕ್ಕೆ ಅನ್ನೋದು ಆಮೇಲೆ ಅರ್ಥ ಆಗ್ತಿತ್ತು. ಬೆಳಗ್ಗಿನ ಚಳಿಯಲ್ಲಿ ಎದ್ದು ಎತ್ತುಗಳಿಗೆ ಮಡ್ಡಿ ಕೊಟ್ಟು ಗದ್ದೆಗೆ ಇಳಿಸುವ ಹೊತ್ತಿಗೆ ಬೇಜಾರು ಮಾಯವಾಗಿ ಕೆಲಸದ ಖುಷಿ ಸಿಗುತ್ತಿತ್ತು. ಇನ್ನು ಗದ್ದೆ ಗೋರಿ ದಿನಗಳಲ್ಲಂತೂ ಸಂಭ್ರಮ ಹೇಳತೀರದು. ಆ ದಿನ ನಮ್ಮ ಗದ್ದೆಗೆ ಬೇರೆಯವರ ಎತ್ತುಗಳು ಬರುತ್ತಿದ್ದವು. ಅವ್ರ ಮನೆಯ ಎತ್ತುಗಳನ್ನು ಹೊಡಕೊಂಡು ಬರುತ್ತಿದ್ದ ನನ್ನ ಸಹಪಾಟಿಗಳಾದ ಶಿವ, ಅವನ ಅಣ್ಣ ದಯಾ, ಲವರನ್ನು ಬೆಳಗ್ಗೆ ನಮ್ಮನೆಗೆ ತಿಂಡಿಗೆ ಕರ್ಕೊಂಡು ಹೋಗೋದು ಅಂದ್ರೆ ಅದು ಸಾಹಸದ ಕೆಲಸ. ತಿಂಡಿಗೆ ಕರೆದರೆ ಸಾಕು ಎಲ್ಲರು ತಪ್ಪಿಸಿಕೊಂಡು ಹೋಗೋದು. ಆಮೇಲೆ ಒತ್ತಾಯ ಮಾಡ್ಕೊಂಡು ಕರ್ಕೊಂಡು ಬರೋದು. ಅವ್ರ ಗದ್ದೆಗೆ ನಮ್ಮ ಎತ್ತು ಕೊಂಡೊಯ್ಯುವಾಗುಲು ನಮ್ಮದು ಅದೇ ಆಟ. ಮನಸ್ಸಿನಲ್ಲಿ ಅವರ ಮನೆಗೆ ಹೋಗಿ ತಿಂಡಿ ತಿನ್ನುವ ಆಸೆ ಇದ್ದರು, ತಪ್ಪಿಸಿಕೊಳ್ಳುವ ಪ್ರಯತ್ನ ನಿಲ್ತಿರಲಿಲ್ಲ. ಇನ್ನು ನೇಜಿ ನೆಡುವಾಗ ಹಾಡುತ್ತಿದ್ದ 'ರಾವೋ ರಾವು ಕೊರಂಗು', 'ದೂಜಿ ಕೆಮ್ಮಯೇ' ಹಾಡುಗಳ ನಡುವೆ ಗದ್ದೆ ಕೆಲಸದ ಆಯಾಸ ಮಾಯವಾಗ್ತಿತ್ತು.
ನಮ್ಮಂತ ಮಕ್ಕಳಿಗೆ ಭತ್ತದ ಕೊಯಿಲಾದ ಮೇಲೆ ಅವೇ ಗದ್ದೆಗಳು ಕ್ರಿಕೆಟ್ ಗ್ರೌಂಡ್ ಗಳಾಗಿಯೂ ಮಾರ್ಪಡುತ್ತಿದ್ದವು. ಎಲ್ಲರ ಸಂಭ್ರಮದ ಜೊತೆಗೆ ಒಂದು ಮನೆಯವರು ಇನ್ನೊಂದು ಮನೆಯವರ ನಡುವೆ ಕೊಡುಕೊಳ್ಳುವ ಬಾಂಧವ್ಯ ಇರ್ತಿತ್ತು. ಕೆಲಸ ಮುಗಿದ ಮೇಲೆ ಸಂಜೆ ಒಬ್ಬರ ಮನೆಗೆ ಇನ್ನೊಬ್ಬರು ಹೋಗಿ ಬರ್ತಿದ್ದೆವು. ಅದಕ್ಕೆ ಇಂತದ್ದೆ ಕಾರಣ ಬೇಕು ಅಂತಿರಲಿಲ್ಲ. ಸುಮ್ಮನೆ ಒಂದು ಹರಟೆ, ತಮಾಷೆ ಎಲ್ಲವು ಅಲ್ಲಿ ಮನೆ ಮಾಡಿರುತ್ತಿತ್ತು. ಕೈಯಲ್ಲಿ ದುಡ್ಡು ಜಾಸ್ತಿ ಇಲ್ಲದಿದ್ರು ಖುಷಿ ಪಡಲು ನೂರು ಕಾರಣಗಳು ಇರುತ್ತಿದ್ದವು.
ಈಗ ಹಾಗಿಲ್ಲ. ಭತ್ತದ ಗದ್ದೆಗಳು ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಬತ್ತಿ ಹೋಗಿವೆ. ಭತ್ತದ ಗದ್ದೆಗಳ ತುಂಬಾ ಅಡಿಕೆ ಮರಗಳು ಎದ್ದು ನಿಂತಿವೆ. ಹಿಂದೆ ದೂರ ದೊರದಲ್ಲಿ ಕಾಣುತ್ತಿದ್ದ ಮನೆಗಳು ಅಡಿಕೆ ತೋಟದಿಂದಾಗಿ ಕಾಣಿಸುತ್ತಿಲ್ಲ. ಅಡಿಕೆಗೆ ಒಳ್ಳೆಯ ರೇಟು ಸಿಕ್ಕ ಮೇಲಂತೂ ಮುಕ್ತವಾಗಿ ಮಾತಾಡೋದೇ ಕಷ್ಟವಾಗಿದೆ. ಒಬ್ಬರ ಮೇಲೆ ಇನ್ನೊಬ್ಬರಿಗೆ ವಿಶ್ವಾಸ ಇಲ್ಲ. ಟಿವಿ ಮುಂದೆ ಕುಳಿತು ಯಾರದೋ ಮನೆಗಳ ಕಥೆಯಂತಿರುವ ಧಾರಾವಾಹಿಗಳು ಮಾತನ್ನು ಮತ್ತಷ್ಟು ಕಡಿಮೆ ಮಾಡಿವೆ.
ಗದ್ದೆಗಳಲ್ಲಿ ಹಾಡುತ್ತಿದ್ದ ' ರಾವೋ ರಾವು ಕೊರಂಗು' ಕಾಣದಂತೆ ಎಲ್ಲೋ ಹಾರಿ ಹೋಗಿದೆ. ಜೊತೆಗೆ ನಮ್ಮೂರ ಜನರ ಬದುಕು ಕೂಡ! ಈಗಿನ ಮಕ್ಕಳಿಗೆ ಭತ್ತ ಹೇಗೆ ಬೆಳಿತಾರೆ ಅನ್ನೋದರ ಬಗ್ಗೆ ಸ್ಪಷ್ಟವಾಗಿ ಗೊತ್ತಾಗ್ತಿಲ್ಲ.
ಅಂದಹಾಗೆ ನಮ್ಮೂರ ಹೆಸರು ಅಡ್ಪಂಗಾಯ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹಳ್ಳಿಗಳ ಎಲ್ಲ ಲಕ್ಷಣ ನಮ್ಮೂರಿಗೂ ಇದೆ. ಹಾಗಾಗಿ ಇಲ್ಲಾದ ಬದಲಾವಣೆ ಜಿಲ್ಲೆಯ ಬಹುಭಾಗದಲ್ಲೂ ಆಗಿದೆ ಅಂತ ಹೇಳೋದಿಕ್ಕೆ ಅಡ್ಡಿಯಿಲ್ಲ.
ಆಗೆಲ್ಲ ಭತ್ತದ ಗದ್ದೆಗಳು ಊರಿಗೆ ಬಂದವರನ್ನು ಸ್ವಾಗತಿಸುತ್ತಿದ್ದವು. ಗದ್ದೆ ಉಳುಮೆ, ನೇಜಿ ಕಾಲದಲ್ಲಿ ನಾವು ಪಡುತ್ತಿದ್ದಂತ ಸಂಭ್ರಮ ಸ್ವರ್ಗಕ್ಕೆ ಕಿಚ್ಚು ಹಚ್ಚೆಂಬಂತಿತ್ತು. ಅಪ್ಪನಿಂದ ಸಿಗುತ್ತಿದ್ದ ಬೈಗಳ. ಅದಕ್ಕೆ ಅವ್ವ ಕೊಡುತ್ತಿದ್ದ ಸಾಥ್. ಇದೆಲ್ಲ ಸ್ವಲ್ಪ ಹೊತ್ತು ಬೇಜಾರ್ ಮಾಡುತ್ತಿದ್ದರು ಅವ್ರು ಹೇಳೋದು ನಮ್ ಒಳ್ಳೇದಕ್ಕೆ ಅನ್ನೋದು ಆಮೇಲೆ ಅರ್ಥ ಆಗ್ತಿತ್ತು. ಬೆಳಗ್ಗಿನ ಚಳಿಯಲ್ಲಿ ಎದ್ದು ಎತ್ತುಗಳಿಗೆ ಮಡ್ಡಿ ಕೊಟ್ಟು ಗದ್ದೆಗೆ ಇಳಿಸುವ ಹೊತ್ತಿಗೆ ಬೇಜಾರು ಮಾಯವಾಗಿ ಕೆಲಸದ ಖುಷಿ ಸಿಗುತ್ತಿತ್ತು. ಇನ್ನು ಗದ್ದೆ ಗೋರಿ ದಿನಗಳಲ್ಲಂತೂ ಸಂಭ್ರಮ ಹೇಳತೀರದು. ಆ ದಿನ ನಮ್ಮ ಗದ್ದೆಗೆ ಬೇರೆಯವರ ಎತ್ತುಗಳು ಬರುತ್ತಿದ್ದವು. ಅವ್ರ ಮನೆಯ ಎತ್ತುಗಳನ್ನು ಹೊಡಕೊಂಡು ಬರುತ್ತಿದ್ದ ನನ್ನ ಸಹಪಾಟಿಗಳಾದ ಶಿವ, ಅವನ ಅಣ್ಣ ದಯಾ, ಲವರನ್ನು ಬೆಳಗ್ಗೆ ನಮ್ಮನೆಗೆ ತಿಂಡಿಗೆ ಕರ್ಕೊಂಡು ಹೋಗೋದು ಅಂದ್ರೆ ಅದು ಸಾಹಸದ ಕೆಲಸ. ತಿಂಡಿಗೆ ಕರೆದರೆ ಸಾಕು ಎಲ್ಲರು ತಪ್ಪಿಸಿಕೊಂಡು ಹೋಗೋದು. ಆಮೇಲೆ ಒತ್ತಾಯ ಮಾಡ್ಕೊಂಡು ಕರ್ಕೊಂಡು ಬರೋದು. ಅವ್ರ ಗದ್ದೆಗೆ ನಮ್ಮ ಎತ್ತು ಕೊಂಡೊಯ್ಯುವಾಗುಲು ನಮ್ಮದು ಅದೇ ಆಟ. ಮನಸ್ಸಿನಲ್ಲಿ ಅವರ ಮನೆಗೆ ಹೋಗಿ ತಿಂಡಿ ತಿನ್ನುವ ಆಸೆ ಇದ್ದರು, ತಪ್ಪಿಸಿಕೊಳ್ಳುವ ಪ್ರಯತ್ನ ನಿಲ್ತಿರಲಿಲ್ಲ. ಇನ್ನು ನೇಜಿ ನೆಡುವಾಗ ಹಾಡುತ್ತಿದ್ದ 'ರಾವೋ ರಾವು ಕೊರಂಗು', 'ದೂಜಿ ಕೆಮ್ಮಯೇ' ಹಾಡುಗಳ ನಡುವೆ ಗದ್ದೆ ಕೆಲಸದ ಆಯಾಸ ಮಾಯವಾಗ್ತಿತ್ತು.
ನಮ್ಮಂತ ಮಕ್ಕಳಿಗೆ ಭತ್ತದ ಕೊಯಿಲಾದ ಮೇಲೆ ಅವೇ ಗದ್ದೆಗಳು ಕ್ರಿಕೆಟ್ ಗ್ರೌಂಡ್ ಗಳಾಗಿಯೂ ಮಾರ್ಪಡುತ್ತಿದ್ದವು. ಎಲ್ಲರ ಸಂಭ್ರಮದ ಜೊತೆಗೆ ಒಂದು ಮನೆಯವರು ಇನ್ನೊಂದು ಮನೆಯವರ ನಡುವೆ ಕೊಡುಕೊಳ್ಳುವ ಬಾಂಧವ್ಯ ಇರ್ತಿತ್ತು. ಕೆಲಸ ಮುಗಿದ ಮೇಲೆ ಸಂಜೆ ಒಬ್ಬರ ಮನೆಗೆ ಇನ್ನೊಬ್ಬರು ಹೋಗಿ ಬರ್ತಿದ್ದೆವು. ಅದಕ್ಕೆ ಇಂತದ್ದೆ ಕಾರಣ ಬೇಕು ಅಂತಿರಲಿಲ್ಲ. ಸುಮ್ಮನೆ ಒಂದು ಹರಟೆ, ತಮಾಷೆ ಎಲ್ಲವು ಅಲ್ಲಿ ಮನೆ ಮಾಡಿರುತ್ತಿತ್ತು. ಕೈಯಲ್ಲಿ ದುಡ್ಡು ಜಾಸ್ತಿ ಇಲ್ಲದಿದ್ರು ಖುಷಿ ಪಡಲು ನೂರು ಕಾರಣಗಳು ಇರುತ್ತಿದ್ದವು.
ಈಗ ಹಾಗಿಲ್ಲ. ಭತ್ತದ ಗದ್ದೆಗಳು ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಬತ್ತಿ ಹೋಗಿವೆ. ಭತ್ತದ ಗದ್ದೆಗಳ ತುಂಬಾ ಅಡಿಕೆ ಮರಗಳು ಎದ್ದು ನಿಂತಿವೆ. ಹಿಂದೆ ದೂರ ದೊರದಲ್ಲಿ ಕಾಣುತ್ತಿದ್ದ ಮನೆಗಳು ಅಡಿಕೆ ತೋಟದಿಂದಾಗಿ ಕಾಣಿಸುತ್ತಿಲ್ಲ. ಅಡಿಕೆಗೆ ಒಳ್ಳೆಯ ರೇಟು ಸಿಕ್ಕ ಮೇಲಂತೂ ಮುಕ್ತವಾಗಿ ಮಾತಾಡೋದೇ ಕಷ್ಟವಾಗಿದೆ. ಒಬ್ಬರ ಮೇಲೆ ಇನ್ನೊಬ್ಬರಿಗೆ ವಿಶ್ವಾಸ ಇಲ್ಲ. ಟಿವಿ ಮುಂದೆ ಕುಳಿತು ಯಾರದೋ ಮನೆಗಳ ಕಥೆಯಂತಿರುವ ಧಾರಾವಾಹಿಗಳು ಮಾತನ್ನು ಮತ್ತಷ್ಟು ಕಡಿಮೆ ಮಾಡಿವೆ.
ಗದ್ದೆಗಳಲ್ಲಿ ಹಾಡುತ್ತಿದ್ದ ' ರಾವೋ ರಾವು ಕೊರಂಗು' ಕಾಣದಂತೆ ಎಲ್ಲೋ ಹಾರಿ ಹೋಗಿದೆ. ಜೊತೆಗೆ ನಮ್ಮೂರ ಜನರ ಬದುಕು ಕೂಡ! ಈಗಿನ ಮಕ್ಕಳಿಗೆ ಭತ್ತ ಹೇಗೆ ಬೆಳಿತಾರೆ ಅನ್ನೋದರ ಬಗ್ಗೆ ಸ್ಪಷ್ಟವಾಗಿ ಗೊತ್ತಾಗ್ತಿಲ್ಲ.
Friday, January 14, 2011
ಕಲಾಪದ ಆಲಾಪ
ವಿಧಾನಸಭೆಯ ಕಲಾಪಗಳು ಚರ್ಚೆಯಿಲ್ಲದೆ ಮುಕ್ತಾಯವಾಗಿವೆ. ಹತ್ತು ದಿನಗಳ ಅಧಿವೇಶನ ಆರೇ ದಿನಕ್ಕೆ ಅಂತ್ಯಗೊಂಡಿದೆ.
ಈ ಬಾರಿ ಅಧಿವೇಶನ ಆರಂಭವಾದಾಗ ಹಲವಾರು ನಿರೀಕ್ಷೆಗಳನ್ನು ಜನ ಇಟ್ಟುಕೊಂಡಿದ್ದರು. ಅದು ಹಗರಣಗಳ ವಿಷಯದಿಂದ ಹಿಡಿದು ಕೃಷ್ಣಾ ನದಿ ನೀರಿನ ಲಭ್ಯತೆಯ ಸದ್ಭಳಕೆವರೆಗೆ ಹಲವಾರು ವಿಚಾರಗಳು ಸದನದ ಮುಂದಿದ್ದವು. ಆದ್ರೆ ಅದ್ಯಾವುದಕ್ಕೂ ಅವಕಾಶ ಸಿಗಲೇ ಇಲ್ಲ.
ಆರು ದಿನ ನಡೆದ ಕಲಾಪದಲ್ಲಿ ಮೊದಲ ದಿನ ರಾಜ್ಯಪಾಲರ ಭಾಷಣಕ್ಕೆ ಸೀಮಿತವಾಯಿತು. ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಸುಳ್ಳು ಸಾಧನೆಗಳ ಭಾಷಣ ಓದಬಾರದು ಅಂತ ಪ್ರತಿಪಕ್ಷಗಳು ಸದನದಲ್ಲಿ ಅಡ್ಡಿಪಡಿಸಿದರು. ಹೀಗಾಗಿ ರಾಜ್ಯಪಾಲರು ಓದದೆಯೇ ಸದನದಲ್ಲಿ ಭಾಷಣ ಮಂಡನೆಯಾಯಿತು. ಇದರ ಮಾರನೆ ದಿನ ನಡೆದ ಸಂತಾಪ ಸೂಚನೆ ಕಲಾಪ ಮಾತ್ರ ಯಾವುದೇ ಅಡ್ಡಿಯಿಲ್ಲದೆ ನಡೆದಿದ್ದು. ಸೋಮವಾರದಿಂದ ಗುರುವಾರದ ತನಕ ನಾಲ್ಕು ದಿನ ನಡೆದಿದ್ದು ಬರೀ ಆಲಾಪ ಅಷ್ಟೆ.
ಸದನ ಅನಿರ್ಧಿಷ್ಟಾವಧಿಗೆ ಮುಂದಕ್ಕೆ ಹೋಗಿದ್ದಕ್ಕೆ ಆಡಳಿತ ಹಾಗು ಪ್ರತಿಪಕ್ಷಗಳು ಪರಸ್ಪರರ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ಆದರೆ ಇದರಲ್ಲಿ ಎರಡೂ ಕಡೆಯವರ ಪಾಲು ಸಮಾನವಾಗಿದೆ ಅನ್ನೋದು ಸಾಮಾನ್ಯ ಜನರಿಗೂ ಅರ್ಥವಾಗುವಂತದ್ದು. ಇಲ್ಲಿ ಯಾರು ಸರಿ ಯಾರು ತಪ್ಪು ಅನ್ನೋದಕ್ಕಿಂತಲೂ ನಷ್ಟವಾಗಿದ್ದು ಮಾತ್ರ ರಾಜ್ಯದ ಜನತೆಗೆ.
ಹಿಂದೆಲ್ಲ ಗಲಾಟೆಗೆ ಬಿಹಾರದತ್ತ ಬೊಟ್ಟು ಮಾಡುತಿದ್ದರು. ಆದ್ರೆ ಕಳೆದ ೫ ವರ್ಷಗಳಿಂದ ಬಿಹಾರ ದೇಶಕ್ಕೆ ಮಾದರಿಯಾಗುವ ಹಾದಿ ತುಳಿಯುತ್ತಿದೆ. ಆದ್ರೆ ಸದಾ ಮಾದರಿ ಆಗಿರುತ್ತಿದ್ದ ಕರ್ನಾಟಕ ಎತ್ತ ಸಾಗುತ್ತಿದೆ ?
ಈ ಬಾರಿ ಅಧಿವೇಶನ ಆರಂಭವಾದಾಗ ಹಲವಾರು ನಿರೀಕ್ಷೆಗಳನ್ನು ಜನ ಇಟ್ಟುಕೊಂಡಿದ್ದರು. ಅದು ಹಗರಣಗಳ ವಿಷಯದಿಂದ ಹಿಡಿದು ಕೃಷ್ಣಾ ನದಿ ನೀರಿನ ಲಭ್ಯತೆಯ ಸದ್ಭಳಕೆವರೆಗೆ ಹಲವಾರು ವಿಚಾರಗಳು ಸದನದ ಮುಂದಿದ್ದವು. ಆದ್ರೆ ಅದ್ಯಾವುದಕ್ಕೂ ಅವಕಾಶ ಸಿಗಲೇ ಇಲ್ಲ.
ಆರು ದಿನ ನಡೆದ ಕಲಾಪದಲ್ಲಿ ಮೊದಲ ದಿನ ರಾಜ್ಯಪಾಲರ ಭಾಷಣಕ್ಕೆ ಸೀಮಿತವಾಯಿತು. ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಸುಳ್ಳು ಸಾಧನೆಗಳ ಭಾಷಣ ಓದಬಾರದು ಅಂತ ಪ್ರತಿಪಕ್ಷಗಳು ಸದನದಲ್ಲಿ ಅಡ್ಡಿಪಡಿಸಿದರು. ಹೀಗಾಗಿ ರಾಜ್ಯಪಾಲರು ಓದದೆಯೇ ಸದನದಲ್ಲಿ ಭಾಷಣ ಮಂಡನೆಯಾಯಿತು. ಇದರ ಮಾರನೆ ದಿನ ನಡೆದ ಸಂತಾಪ ಸೂಚನೆ ಕಲಾಪ ಮಾತ್ರ ಯಾವುದೇ ಅಡ್ಡಿಯಿಲ್ಲದೆ ನಡೆದಿದ್ದು. ಸೋಮವಾರದಿಂದ ಗುರುವಾರದ ತನಕ ನಾಲ್ಕು ದಿನ ನಡೆದಿದ್ದು ಬರೀ ಆಲಾಪ ಅಷ್ಟೆ.
ಸದನ ಅನಿರ್ಧಿಷ್ಟಾವಧಿಗೆ ಮುಂದಕ್ಕೆ ಹೋಗಿದ್ದಕ್ಕೆ ಆಡಳಿತ ಹಾಗು ಪ್ರತಿಪಕ್ಷಗಳು ಪರಸ್ಪರರ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ಆದರೆ ಇದರಲ್ಲಿ ಎರಡೂ ಕಡೆಯವರ ಪಾಲು ಸಮಾನವಾಗಿದೆ ಅನ್ನೋದು ಸಾಮಾನ್ಯ ಜನರಿಗೂ ಅರ್ಥವಾಗುವಂತದ್ದು. ಇಲ್ಲಿ ಯಾರು ಸರಿ ಯಾರು ತಪ್ಪು ಅನ್ನೋದಕ್ಕಿಂತಲೂ ನಷ್ಟವಾಗಿದ್ದು ಮಾತ್ರ ರಾಜ್ಯದ ಜನತೆಗೆ.
ಹಿಂದೆಲ್ಲ ಗಲಾಟೆಗೆ ಬಿಹಾರದತ್ತ ಬೊಟ್ಟು ಮಾಡುತಿದ್ದರು. ಆದ್ರೆ ಕಳೆದ ೫ ವರ್ಷಗಳಿಂದ ಬಿಹಾರ ದೇಶಕ್ಕೆ ಮಾದರಿಯಾಗುವ ಹಾದಿ ತುಳಿಯುತ್ತಿದೆ. ಆದ್ರೆ ಸದಾ ಮಾದರಿ ಆಗಿರುತ್ತಿದ್ದ ಕರ್ನಾಟಕ ಎತ್ತ ಸಾಗುತ್ತಿದೆ ?
Thursday, December 9, 2010
ಬರೆಯುವ ಖುಷಿಗೆ..
ಮತ್ತೆ ಬರೆಯಬೇಕೆಂಬ ಆಸೆ ಆಗ್ತಿದೆ. ಈ ಬಾರಿ ನಿರಂತರವಾಗಿ ಬರೀಬೇಕೆಂದು ನಿಶ್ಚಯ ಮಾಡಿದ್ದೀನೆ. ಯಾನ ಆರಂಭಿಸಿ ಅರ್ಧಕ್ಕೆ ನಿಲ್ಲಿಸುವುದು ಒಳ್ಳೆಯದಲ್ಲ ಅನ್ನೋದು ನಂಗೂ ಗೊತ್ತು. ಬರೀತೀನಿ.
Sunday, May 31, 2009
ಇನ್ನೆಷ್ಟು ದಿನ ಈ ಖುಷಿ
ಮತ್ತದೇ ಹೊಸ ಭರವಸೆಗಳನ್ನು ಜನ ಕೇಳುವಂತಾಗಿದೆ. ಸರ್ಕಾರ ಒಂದು ವರ್ಷ ಪೂರೈಸಿದ ಸಂತಸವನ್ನು ಯಡಿಯೂರಪ್ಪ ಮತ್ತವರ ತಂಡ ಜೋರಾಗಿ ಆಚರಿಸಿಕೊಂಡಿದೆ. ಅಭಿವೃದ್ಧಿಯ ಮಾತುಗಳನ್ನು ಒಂದು ವರ್ಷ ಮುಗಿದ ಮೇಲೂ ಸಿಎಂ ಹಿಂದಿನಷ್ಟೇ ಹುರುಪಿನಿಂದ ಹೇಳುತ್ತಿರುವುದನ್ನು ಜನ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದಾರೆ. ಆದ್ರೆ ಮಾತು ಮುಗಿಸಿದ ಮೇಲೆ ಯಡಿಯೂರಪ್ಪ ಮತ್ತವರ ತಂಡ ಇನ್ನಾದ್ರು ಕೆಲಸ ಮಾಡಬೇಕು ಅನ್ನೋದು ಮೌನವಾಗಿರುವ ಜನರ ನಿರೀಕ್ಷೆ.
ಒಂದೆಡೆ ಸರ್ಕಾರ ಒಂದು ವರ್ಷ ಮುಗಿಸಿದ ಸಂಭ್ರಮದಲ್ಲಿದ್ರೆ ಇತ್ತ ಬಿಜೆಪಿಯ ಉಚ್ಚಾಟಿತ ನಾಯಕ ಯತ್ನಾಳ್ ಸರ್ಕಾರದ ಭವಿಷ್ಯದ ಬಗ್ಗೆ ಮಾತಾಡಿದ್ದಾರೆ. ಈ ಆರೋಪವನ್ನು ಸುಲಭವಾಗಿ ಉಪೇಕ್ಷಿಸುವಂತಿಲ್ಲ. ಯಾಕಂದ್ರೆ ಸರ್ಕಾರದ ಸಂಭ್ರಮದಲ್ಲಿ ಸಚಿವ ಈಶ್ವರಪ್ಪ ಕೂಡ ಪಾಲ್ಗೊಂಡಿಲ್ಲ. ಗಣಿ ಧಣಿಗಳ ಅಸಂತೃಪ್ತಿ ಕೂಡ ಗುಟ್ಟಾಗಿ ಉಳಿದಿಲ್ಲ.
ರಾಜ್ಯದಲ್ಲಿ ಬಿಜೆಪಿಯ ಖುಷಿ ಇನ್ನೆಷ್ಟು ದಿನ ಅನ್ನೋ ಪ್ರಶ್ನೆಗೆ ಸಧ್ಯಕ್ಕೆ ಉತ್ತರವಿಲ್ಲ... !
ಒಂದೆಡೆ ಸರ್ಕಾರ ಒಂದು ವರ್ಷ ಮುಗಿಸಿದ ಸಂಭ್ರಮದಲ್ಲಿದ್ರೆ ಇತ್ತ ಬಿಜೆಪಿಯ ಉಚ್ಚಾಟಿತ ನಾಯಕ ಯತ್ನಾಳ್ ಸರ್ಕಾರದ ಭವಿಷ್ಯದ ಬಗ್ಗೆ ಮಾತಾಡಿದ್ದಾರೆ. ಈ ಆರೋಪವನ್ನು ಸುಲಭವಾಗಿ ಉಪೇಕ್ಷಿಸುವಂತಿಲ್ಲ. ಯಾಕಂದ್ರೆ ಸರ್ಕಾರದ ಸಂಭ್ರಮದಲ್ಲಿ ಸಚಿವ ಈಶ್ವರಪ್ಪ ಕೂಡ ಪಾಲ್ಗೊಂಡಿಲ್ಲ. ಗಣಿ ಧಣಿಗಳ ಅಸಂತೃಪ್ತಿ ಕೂಡ ಗುಟ್ಟಾಗಿ ಉಳಿದಿಲ್ಲ.
ರಾಜ್ಯದಲ್ಲಿ ಬಿಜೆಪಿಯ ಖುಷಿ ಇನ್ನೆಷ್ಟು ದಿನ ಅನ್ನೋ ಪ್ರಶ್ನೆಗೆ ಸಧ್ಯಕ್ಕೆ ಉತ್ತರವಿಲ್ಲ... !
Subscribe to:
Posts (Atom)